Tuesday 17 November 2015

ಕನ್ನಡ ಚುಟುಕುಗಳು - 19


೯೧. ಪ್ರತಿದಿನ ದೊ0ಭಿ ಗಲಭೆ ಮತಭೇದ 
       ಯಾಕೆ ಬೇಕು ಈ ಕೋಮುವಾದ? 
       ನಾವು ಮನುಜರು, ಹರಿಯುವುದು ಕೆ0ಪು ರಕ್ತ 
       ಎನ್ನುವುದು ನನ್ನ ವಾದ

೯೨. ಸ್ನೇಹಿತರೇ ನನ್ನ ಜೀವಾಳ 
       ಅವರೇ ಬರೆಯಲು ನನಗೆ ಸ್ಫೂರ್ತಿ 
       ಕವನ ಬರೆಯಲು ನೀಡುವರು ಬೆ0ಬಲ 
       ಒಳ್ಳೆಯ ಸ್ನೇಹಿತರೇ ನಿಜವಾದ ಆಸ್ತಿ 
     😘😘😘😘😘😘😘

೯೩. ಒಮ್ಮೆ ದೇವರಿಗೆ ಹಾಕಿದೆ ಬೆದರಿಕೆ 
       ನೀನು ಮೇಲೆ ಇರುವುದು ಯಾತಕೆ ? 
       ಇಲ್ಲಿ ನಡೆಯುತಿದೆ ಕೊಲೆ ಸುಲಿಗೆ ಅತ್ಯಾಚಾರ 
       ಕೆಳಗೆ ಬ0ದು ನೋಡಲೂ ನಿನಗೆ ತಾತ್ಸಾರ 
       ಹೀಗೆಯೇ ಮು0ದವರಿದರೆ ನಿನ್ನ ಕಣ್ಣಾಮುಚ್ಚಾಲೆ 
       ಅನಿಸುವುದು ನಿನ್ನ ಪೂಜಿಸುವುದನ್ನು ಬಿಡಲೆ

೯೪. ಬದುಕಿನಲ್ಲಿ ಗೆದ್ದರೆ...
       ಬಾಳು ಹಸನಾದ ಹುಲ್ಲು 
       ಬದುಕಿನಲ್ಲಿ ಬಿದ್ದರೆ... 
       ಆಳಿಗೊ0ದು ಕಲ್ಲು

೯೫. ಕವನ ಯಶಸ್ವಿ ಆಗಲು 
       ಬೇಕು ಒಳ್ಳೆಯ ತಲೆಬರಹ 
       ಜೀವನ ಯಶಸ್ವಿ ಆಗಲು 
       ಬೇಕು ಒಳ್ಳೆಯ ಹಣೆಬರಹ 
     😜😜😜😜😜😜

- ರೇವಿನಾ

No comments:

Post a Comment